Techology

article r6

AI ಎಂಬ ವಿದ್ಯುತ್ ಬಕಾಸುರ

ಈ ವರ್ಷದ ಆರಂಭದಲ್ಲಿ ಮೈಕ್ರೋಸಾಫ್ಟ್ ಕಂಪನಿ ಅರ್ಚನಾ ಮನೋಹರನ್ ಎಂಬುವವರನ್ನು ಉದ್ಯೋಗಕ್ಕೆ ಸೇರಿಸಿಕೊಂಡಿತು. ಇವರು ಅದಕ್ಕೂ ಮೊದಲು ಸಣ್ಣಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳನ್ನು ತಯಾರಿಸುವ ಕಂಪನಿಯ ನಿರ್ದೇಶಕಿಯಾಗಿದ್ದರು. ಇವರು ಇಲ್ಲಿಯ ಸಾಫ್ಟ್‌ವೇರು ಇಲ್ಲಿಯ ನ್ಯೂಕ್ಲಿಯರ್ ರಿಯಾಕ್ಟರು? ಸುದ್ದಿಯೇನೆಂದರೆ ಮುಂಬರುವ ದಿನಗಳಲ್ಲಿ ಮೈಕ್ರೋಸಾಫ್ಟ್ ತನ್ನ ಡೇಟಾಸೆಂಟರುಗಳ ವಿದ್ಯುತ್ ಬೇಡಿಕೆಗಾಗಿ ಸಣ್ಣ ಗಾತ್ರದ ನ್ಯೂಕ್ಲಿಯರ್ ರಿಯಾಕ್ಟರುಗಳ ಮೊರೆ ಹೋಗಲಿದೆ ಎಂದು. ಮೊದಲಿಗೆ ಡೇಟಾ ಸೆಂಟರೆಂದರೆ ಡಿಜಿಟಲೀಕರಣಗೊಂಡಿರುವ ಜಗತ್ತಿನ ಗರ್ಭಗುಡಿ. ಅದು ಬ್ಯಾಂಕುಗಳಿರಲಿ, ಫೇಸ್‌ಬುಕ್ಕಿರಲಿ, ಇನ್‌ಸ್ಟಾಯಿರಲಿ, ನಮ್ಮೆಲ್ಲರ ಮಾಹಿತಿ ಕೆಬಿಹೆಚ್ ಆಗಿರುವ, ನಾವು […]

AI ಎಂಬ ವಿದ್ಯುತ್ ಬಕಾಸುರ Read More »

article r5

ಇ-ಸಿಮ್ ಹೇಗೆ ಕೆಲಸ ಮಾಡುತ್ತೆ?

ಸಿಮ್ ವಿಚಾರದಲ್ಲಿ ನಾವು ಎಷ್ಟು ಬೇಗ ಎಷ್ಟು ದೂರ ಬಂದುಬಿಟ್ಟೆವು! 1991ರಲ್ಲಿ ತಯಾರಾದ ಮೊದಲ ಸಿಮ್ ಒಂದು ಎಟಿಎಂ ಕಾರ್ಡಿನ ಗಾತ್ರವಿತ್ತು ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಅದರಲ್ಲಿ ಐದು ಎಸ್ಸೆಮ್ಮೆಸ್‌ಗಳು, ಇಪ್ಪತ್ತು ನಂಬರುಗಳನ್ನು ಸೇವ್ ಮಾಡಬಹುದಿತ್ತಂತೆ. ಬಹುತೇಕ ಭಾರತೀಯರಿಗೆ ಪರಿಚಯವಿರುವ ಸಿಮ್ ಅದರ ಮಗಿರಾಯ ‘ಮಿನಿ ಸಿಮ್’, 1996ರಲ್ಲಿ ಬಂದಿದ್ದು; ಒಂದಿಂಚು ಉದ್ದ ಇತ್ತು. ಮೊಮ್ಮಗ ಬಂದಿದ್ದು 2010ರಲ್ಲಿ; ‘ಮೈಕ್ರೋ ಸಿಮ್’ ಎಂದು ಕರೆಸಿಕೊಂಡಿತು. ಇದನ್ನು ಕಷ್ಟಪಟ್ಟು ನಮ್ಮ ಬೆರಳುಗಳಲ್ಲಿ ಹಿಡಿಯಬಹುದಾಗಿತ್ತು. 2012ರ ಹೊತ್ತಿಗೆ ಮರಿಮಗನ ಜನನ,

ಇ-ಸಿಮ್ ಹೇಗೆ ಕೆಲಸ ಮಾಡುತ್ತೆ? Read More »

article r4

ಡ್ರೋನ್ ಚಲನೆಗೆ ಫ್ಯಾನಿನ ಮಜಕು

ಮೊನ್ನೆ ನಮ್ಮಮ್ಮ ಕಾಲ್ ಮಾಡಿದ್ರು. ‘ಬಾಳ್ಳೆಗುಪ್ಪೆ ರಾಜಪ್ಪ ಐಟಿಐ ಕೃಷಿ ತರಬೇತಿಗೆ ಹೋದ’ ಅಂತ. ಅರೆರೆ, ಭವ್ಯ ಭಾರತ ಈ ಮಟ್ಟಿಗೆ ಬೆಳಗುತ್ತಿದ್ದೆಯಾ ಅಂತ ನನಗೆ ಅಚ್ಚರಿಯಾಯಿತು. ರಾಜಪ್ಪ ರೈತರು. ಒಂದಾನೊಂದು ಕಾಲದಲ್ಲಿ ಬಾಳೆಕೋಟೆ ಕಟ್ಟಿದ್ದರಿಂದ ಆ ಹೆಸರು ಅಂಟಿಕೊಂಡಿದೆ. ಮಗ ‘ಜೀಡಪ್ಪ’ ತೋಟಗಾರಿಕೆ ಇಲಾಖೆಯಲ್ಲಿ ಕೃಷಿ ಅಧಿಕಾರಿ ಆಗಿರುವುದರಿಂದ ಇವರು ಪ್ರಗತಿಪರ ರೈತರಾಗಿದ್ದಾರೆ. ನನಗೆ ಒಂದು ಕ್ಷಣ ಇದ್ದರೂ ಇರಬಹುದು ಅನಿಸಿಬಿಟ್ಟಿತ್ತು! ‘ಎದಕಮ್ಮ?’, ಕೇಳಿದೆ. ‘ಮುಸುಕಿನ ಜೋಳಕ್ಕೆ ಬೆಂಕಿ ವರ್ಷದಂತ ಕೀಟಗಳ ಕಾಟ ಇತ್ತಲ್ವಾ ಅದಕ್ಕೆ

ಡ್ರೋನ್ ಚಲನೆಗೆ ಫ್ಯಾನಿನ ಮಜಕು Read More »

article r3

ಹೈಡ್ರೋಪ್ಲೇನಿಂಗ್ ಎಂದರೇನು?

ಕಳೆದ ಗುರುವಾರ ನಾನು ಮೈಸೂರಿನಿಂದ ಬೆಂಗಳೂರಿಗೆ ಬರುವಾಗ ಮಾರ್ಗಮಧ್ಯೆ ಒಂದು ಅಪಘಾತ ನೋಡಿದೆ. ಸಮಯ ಸಂಜೆ ಸುಮಾರು ಮೂರು ಗಂಟೆ. ಹೆದ್ದಾರಿಯ ಕೆಳಗೆ ಅಡ್ಡ ರಸ್ತೆಯಿದ್ದು ಅದಕ್ಕೊಂದು ಗವಾಕ್ಷಿಯಿದ್ದು ಈ ಕಾರು ಗವಾಕ್ಷಿಯ ಅಂಚಿನ ಮೇಲೆ ಕುಳಿತಿತ್ತು, ಮೈಸೂರಿನ ದಿಕ್ಕಿನಲ್ಲಿ ಜನ ನೆರೆದಿದ್ದರು, ಒಬ್ಬರ ಕೈಯಿಗೆ ಬ್ಯಾಂಡೇಜ್ ಕಟ್ಟುತ್ತಿದ್ದರು, ರಕ್ತ ಸೋರುತ್ತಿತ್ತು. ‘ಏನಾಯಿತು?’, ಕೇಳಿದೆ. ‘ಮಳೆ ನೀರಿನಿಂದ ಸ್ಕಿಡ್ಡಾಗಿದೆ’ ಉತ್ತರ. ‘ಅದು ಹೇಗೆ? ಈ ಗವಾಕ್ಷಿ ಮೇಲೆ ಹಾರಿ ಕುಳಿತಿದೆಯಲ್ಲ?’ ‘ಇದು ಬೆಂಗಳೂರಿನ ಕಡೆಗೆ ಹೋಗುತ್ತಿದ್ದ ಕಾರು.

ಹೈಡ್ರೋಪ್ಲೇನಿಂಗ್ ಎಂದರೇನು? Read More »

aritcle r1

ಆಕಾಶದಾಗೆ ಇನ್ನೊಂದು ಭೂಮಿ ಐತಾ?

1950 ನೇ ಇಸವಿಯ ಒಂದು ಮಧ್ಯಾಹ್ನ ನಮ್ಮ ಇಂದಿನ ನ್ಯೂಕ್ಲಿಯರ್ ರಿಯಾಕ್ಟರುಗಳ, ಅಣುಬಾಂಬುಗಳ ಪಿತಾಮಹ, ಎನ್ನಿಕೊ ಫರ್ಮಿ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡ್ತಾ ಬಾಯ್ತಪ್ಪಿಸೂನ್ ಇತ್ತಿತ್ತಾ ಇದ್ದಿದ್ದೆ ಏನೋ ಹೊಳೆದು ಒಂದು ಪ್ರಶ್ನೆ ಕೇಳಿದ. “Where is everybody?”. ಅಂದ್ರೆ, “ನಮ್ಮ ಹೊರತು ಉಳಿದವರೆಲ್ಲ ಎಲ್ಲಿದ್ದಾರೆ?,” ನಮ್ಮ ಅಂದ್ರೆ ಭೂಮಿ ಮೇಲಿನ ಮನುಷ್ಯರು. ಇದೊಂದು ಗಾಢವಾದ ವೈಜ್ಞಾನಿಕ ಮತ್ತು ತಾತ್ವಿಕ ಪ್ರಶ್ನೆ. ಆ ಊಟ ಮಾಡ್ತಾ ಎತ್ತಿದ ಪ್ರಶ್ನೆ ಮುಂದೆ ಅನೇಕ ಚಿಂತನೆಗಳಿಗೆ ಕಾರಣವಾಗಿ ಅದೇ ‘ಫರ್ಮಿ

ಆಕಾಶದಾಗೆ ಇನ್ನೊಂದು ಭೂಮಿ ಐತಾ? Read More »

article m7

ತಲೆಯೊಳಗೆ ಡೈನೋಸಾರನ್ನೇ ಬಿಟ್ಕೊಳ್ಳೋಣ

ನಾವು ಇಲ್ಲಿ ಅಲ್ಲಿ ಓದುತ್ತೇವೆ. ಆಫ್ರಿಕಾದಲ್ಲಿ, ಅಮೆರಿಕದಲ್ಲಿ, ಯುರೋಪಿನಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಬದುಕಿದ್ದ ಡೈನೋಸಾರ್‌ಗಳ ಬೆನ್ನು ಮೂಳೆ ಸಿಕ್ಕಿತು, ಆದಿಮಾನವನ ತಲೆ ಬುರುಡೆ ಸಿಕ್ಕಿತು, ಸಾವಿರ ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಮಡಿದ ಸೈನಿಕನ ಶವ ಸಿಕ್ಕಿತು, ರಾಜನ ಕುದುರೆ ಬಂಡಿ ಸಿಕ್ಕಿತು ಅಂತಲ್ಲಾ. ಆದರೆ, ಇವೆಲ್ಲ ನಮ್ಮ ದೇಶದಲ್ಲಿ ಯಾಕೆ ಸಿಗಲಿಲ್ಲ ಯೋಚಿಸಿದ್ದೀರಾ? ನಮ್ಮಲ್ಲಿ ಡೈನೋಸಾರ್ ಇರಲಿಲ್ವೇ? ಆದಿ ಮಾನವರು ವಾಸಿಸಿರಲಿಲ್ವೇ? ರಾಜರುಗಳು ಇರಲಿಲ್ವೇ? ಯುದ್ಧಗಳು ಜರುಗಿಲ್ಲವೇ? ಉತ್ತರ ಹುಡುಕುತ್ತಾ ಹೋದರೆ ಕೆಲವು ಆಶ್ಚರ್ಯ

ತಲೆಯೊಳಗೆ ಡೈನೋಸಾರನ್ನೇ ಬಿಟ್ಕೊಳ್ಳೋಣ Read More »

article m6

ಮುಂದಿನ ಜಮಾನದ ಫೋನ್‍ಗಳು

ಭವಿಷ್ಯದಲ್ಲಿ ಮನುಷ್ಯ ದಡ್ಡ ಅಥವಾ ಸೋಂಬೇರಿ ಆಗುತ್ತಾನೆ ಎನ್ನುವುದು ಸುಳ್ಳು ಸುಮಾರು ಇಪ್ಪತ್ತು ವರುಷಗಳ ಹಿಂದೆ ಇದ್ದ ನೋಕಿಯಾ ಫೋನ್‍ಗಳನ್ನು 2ಜಿ ಫೋನು ಎನ್ನುತ್ತಿದ್ದೆವು. ನಮ್ಮ ಕೈಲಿರುವ ಫೋನುಗಳನ್ನು 5ಜಿ ಫೋನು ಎನ್ನುತ್ತೇವೆ. ಈಗ ಮಾರುಕಟ್ಟೆಯಲ್ಲಿ ಹೊಸತು ಬಂದಿದೆ- ‘ಎಐ ಫೋನುಗಳು’! ಇವುಗಳ ಬಗ್ಗೆ ಸ್ವಲ್ಪ ತಿಳಿಯೋಣ. ನಮ್ಮ ಫೋನುಗಳಲ್ಲಿರುವ ಚಾಟ್‍ಜಿಪಿಟಿ, ಮೆಟಾ ಎಐಗಳು ಕೇವಲ ಪ್ರಶ್ನೆ ಸ್ವೀಕರಿಸಲು ಮತ್ತು ಉತ್ತರ ತೋರಿಸಲು ಇರುವ ಆಪ್‍ಗಳು. ಪ್ರಶ್ನೆಗೆ ಉತ್ತರ ಹುಡುಕುವ ಪ್ರಕ್ರಿಯೆ ಕಣ್ಣೆವೆಯಲ್ಲಿ ಜರುಗುತ್ತದೆ. ಅಂದರೆ ಇಂಟರ್ನೆಟ್

ಮುಂದಿನ ಜಮಾನದ ಫೋನ್‍ಗಳು Read More »

article m5

ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ

ಕವಿ ‘ಜೀವಯಾನ’ ಮಂಜುನಾಥರ ಒಂದು ಕವಿತೆ ‘ಹಕ್ಕಿಪಲ್ಲಿ’ ಎಂದು. ಕವಿ ಒಂದು ದಿನ ಕೂತು ತನ್ನ ಆಲಸ್ಯದಿಂದಾಗಿಯೋ, ಅವಕಾಶ ವಂಚಿತನಾಗಿಯೋ ಅಥವಾ ತನ್ನ ಕೈಲಿಲ್ಲದ ಕೇವಲ ಅಕ್ಷರಗಳೇ ತುಂಬಿರುವ ಬದುಕಿನಿಂದಾಗಿಯೋ ನಾನು ಏನೆಲ್ಲ ಕಳೆದುಕೊಂಡಿರಬಹುದು ಎಂದು ಲೆಕ್ಕ ಹಾಕುತ್ತ ಆವತ್ತು ಆತಂಕಕ್ಕೆ ಒಳಗಾಗುತ್ತಾನೆ. ಸುತ್ತಲಿನ ಜನರನ್ನು ನೋಡುತ್ತ ತಾನೂ ಇವರಂತಾಗಬಹುದಿತ್ತು ಎಂದು ಅನಿಸುತ್ತದೆ. ಹಣ ಗಳಿಸಿದವನೊಬ್ಬ, ಹೆಣ್ಣು ಗಳಿಸಿದವನೊಬ್ಬ, ಇನ್ಯಾರಿಗೋ ಜ್ಞಾನ, ಪ್ರತಿಭೆ- ಕೀರ್ತಿ ಇವೆಲ್ಲರ ಸಾಧನೆಗಳಿಂದ ಹೆಚ್ಚಿರುತ್ತಾರೆ. ಮಂಕು ಕೋಣೆಯಲ್ಲಿ ಮರದ ಮೇಜಿನ ಮೇಲೆ ಕುಳಿತು

ಏರ್ ಶೋದಲ್ಲಿ ಹಕ್ಕಿಪಲ್ಲಿಯ ಸೋಜಿಗ Read More »

article m4

ಯಾವುದು ನಿಜ? ಯಾವುದು ಮಿಥ್ಯ?

ತಾತ್ವಿಕ ಜಿಜ್ಞಾಸೆಗಳಲ್ಲಿ ಸಂಕೀರ್ಣ ವಾದ ತಿರಸ್ಕರಿಸಲು ಓಕಾಮ್ ಮಾರ್ಗ ಅನುಕೂಲ ಜಗತ್ತು ಬಹಳ ಸಂಕೀರ್ಣವಾಗುತ್ತಿದೆ. ಸತ್ಯವೆಂಬುದು ಒಂದು ಅಭಿಪ್ರಾಯ ಮಾತ್ರವಾಗಿರುತ್ತದೆ. ಜನ ಏನನ್ನು ನಂಬಬೇಕು ಏನನ್ನು ಬಿಡಬೇಕು ಎಂದು ಗೊಂದಲಕ್ಕೀಡಾಗುತ್ತಿದ್ದಾರೆ. ಹೀಗಾದಾಗ ಮನುಷ್ಯ ವರದಿಗಳಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾನೆ. ತೋಳ ಬಂತು ತೋಳ ಕತೆಯಾಗುತ್ತದೆ. ನೈಜ ಅಪಾಯ ಎದುರಾದಾಗಲೂ ‘ಇವರಲ್ಲಿಯೂ ಯಾರೋ ಮೋಸಸ್ತು, ಕಪಟ ಇರಬಹುದು’ ಎಂದು ಶಂಕಿಸಿ ನಿಷ್ಕ್ರಿಯನಾಗುತ್ತಾನೆ. ಇದು ಜನಸಾಮಾನ್ಯ ನಿಷ್ಠೆ ಎದುರಿಸುವ ದ್ವಂದ್ವ. ವಿಜ್ಞಾನಿಗಳು ತಂತ್ರಜ್ಞಾನಿಗಳು ಇಂಥ ದ್ವಂದ್ವಕ್ಕೆ ಬಿದ್ದರೆ ಏನಾಗುತ್ತದೆ? ದಿನನಿತ್ಯ ಕೆಲಸಗಳಲ್ಲಿ

ಯಾವುದು ನಿಜ? ಯಾವುದು ಮಿಥ್ಯ? Read More »

article m3

ಯಥಾ ಪ್ರಜಾ, ತಥಾ ಎಐ!

ಕಳೆದ ವಾರ ‘ಈ ಹೊತ್ತಿಗೆ’ ಸಾಹಿತ್ಯ ಸಮಾರಂಭದಲ್ಲಿ ಕನ್ನಡದ ಹಿರಿಯ ಲೇಖಕರಾದ ಎಸ್. ದಿವಾಕರ್ ಈ ಪ್ರಶ್ನೆ ಎತ್ತಿದರು- “ಎಐಗೆ ಸರಿಯಾದ ಮತ್ತು ಸಮರ್ಪಕವಾದ ತರಬೇತಿ ಕೊಟ್ಟರೆ ಅದು ನವೋದಯ, ನವ್ಯ, ಪ್ರಗತಿಶೀಲ, ಬಂಡಾಯ ಮುಂತಾಗಿ ಇರುವ ಯಾವ ಮಾರ್ಗದಲ್ಲಿಯಾದರೂ ಚೆನ್ನಾಗಿರುವ ಕವಿತೆ ಬರೆಯುತ್ತದೆ ಎಂದು ಇಟ್ಟುಕೊಳ್ಳೋಣ; ಆದರೆ, ಅದು ಸಾಹಿತ್ಯ ಲೋಕದಲ್ಲಿ ಈವರೆಗೆ ಕಂಡಿರದ ಹೊಸ ಮಾರ್ಗದಲ್ಲಿ ಕವಿತೆ ಬರೆಯಲು ಶಕ್ಯವೇ?”. ಉತ್ತರ “ಬಹುತೇಕ ಇಲ್ಲ” ಎನ್ನುವಂತಿತ್ತು. ಎಐ ಲಭ್ಯವಿರುವ ಎಲ್ಲ ಮಾರ್ಗಗಳ ಎಲ್ಲಾ ಸಾಹಿತ್ಯವನ್ನೂ

ಯಥಾ ಪ್ರಜಾ, ತಥಾ ಎಐ! Read More »